Tuesday, October 28, 2008

ಅನುಭವದ ಅನುಭಾವ ........

ಅನುಭವ ಈ ಪರಿಕಲ್ಪನೆಯೇ ಜಟಿಲ . ಆದ್ರೆ ಯಾವುದೇ ಕೆಲಸಕ್ಕೆ ಹೋದ್ರು ಮೊದಲು ಕೇಳೋ ಪ್ರಶ್ನೆ ನಿಮಗೆ ಎಷ್ಟು ಅನುಭವ. ಕೆಲಸ ಕೊಡೋಕೆ ಇವರು ರೆಡಿ ಇರೋಲ . ಅಂದ್ರೆ ಬಹುತೇಕ ಕಂಪನಿಗಳ ಪ್ರಕಾರ ಅನುಭವ ಅನ್ನೋದು ನಿಮ್ಮ ಹೆಸರಿನ ಮುಂದೆ ಪೋಣಿಸಿಕೊಳ್ಳೋ ಸರ್ಟಿಫಿಕೇಟ್ ......... ನೋಡು ನನಗೆ madhyama ಕ್ಷೇತ್ರದಲ್ಲಿ ೨೦ ವರ್ಷ ಅನುಭವ ಇದೆ . ಹೇ ತಗೀ ನಾನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜೀವಮಾನ ಪೂರೈಸಿದ್ದೇನೆ . ಹೀಗೆಂದು ಬಡಾಯಿಕೊಚಿ ಕೊಳ್ಳೋ ಅನೇಕ ಸ್ವಯಮ್ ಘೋಷಿತ ಬುದ್ಧಿವಂತರನ್ನ ನಾವು ನೋಡಿದ್ದೇವೆ . ಈ ವರ್ಗದ ಪ್ರಕಾರ ವರ್ಷಗಳ ಗುಣಕಾರವೇ ಕೆಲಸದ ನೈಪುಣ್ಯತೆ ಅಳೆಯುವ ಮಾನದಂಡ . ಈ ವಾದಕ್ಕೆ ನನ್ನ ತೀವ್ರ ಆಕ್ಷೇಪವಿದೆ . ನೀವು ಸಮಾನಮನಸ್ಕರಾಗಿ ನನ್ನ ವಾದವನ್ನು ಒಪ್ಪುವಿರಿ ಎಂದುಕೊಂಡು ಈ ಪದಗಳ್ಳನು ಜೋಡಿಸುವ ಯತ್ನಕ್ಕೆ ಮುಂದಾಗಿದ್ದೇನೆ . ಆದ್ರೆ ಒಪ್ಪಿಕೊಳೋದು ನಿಮ್ಮ ಅಂತಃಕರಣಕ್ಕೆ ಬಿಟ್ಟ ವಿಷಯ .
ಅಭಿನವ್ ಬಿಂದ್ರಾ ೨೪ ನೇ ವಯಸಿನಲ್ಲೇ ಒಲಿಂಪಿಕ್ಸ್ ನಲ್ಲಿ ಭಾರತ ಮಾತೆಯ ಕೊರಳಿಗೆ ಸ್ವರ್ಣ ಧರಿಸಿದ ಹೆಮ್ಮೆಯ ಪುತ್ರ .....
ಯುನೋನ ಬುಕಾಸೋವ್ ೫ ನೇ ವಯಸಿನಲ್ಲೇ ೧೪ ಸಾವಿರ ಅಡಿ ಎತ್ತರದ ಶಿಖರ ಏರಿದ ಧೀರೆ .... ಮಾಸ್ಟರ್ ಕಿಶನ್ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ......ದರ್ಶೀಲ್ ಸಫಾರಿ ಪ್ರಥಮ ಚಿತ್ರ ತಾರೆ ಜಮೀನ್ ಪರ ಚಿತ್ರದಲ್ಲೆ ಎಲ್ಲರ ಮನಗೆದ್ದ ತುಂಟ .
ಇವರೆಲ್ಲರ ಹೆಸರುಗಳ್ಳನ್ನ ಯಾಕೆ ಹೇಳ್ತಾಇದೀನಿ ಅಂತ ಆಶ್ಚರ್ಯವಾಗಬಹುದು . ಇವರೆಲ್ಲರ ಗುರುತುಗಳು ಇಲ್ಲಿ ಪ್ರಸ್ತುತ .
ಯಾಕಂದ್ರೆ ಇವರಾರು ಅವರವರ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಇದ್ದವರಲ್ಲ . ಆದ್ರೆ ಅಂದುಕೊಂಡದನ್ನ ಸಾಧಿಸಿಯೇ ತಿರಬೇಕೆಂಬ ಮಹದುದ್ದೇಶ ಈವರಲ್ಲಿ ಮನೆಮಾಡಿತ್ತು . ಕೂತರು ನಿಂತರು ಗೆಲ್ಲಲೆಬೇಕಂಬ ಮಂತ್ರ ಅವರನ್ನ ಮಂತ್ರಮುಗ್ಧಗೊಳಿಸುತಿತ್ತು .ಒಂದೊಮ್ಮೆ ನಿದ್ರೆಗೆ ಜರಿದರೂ ಕನಸು ಕನವರಿಕೆ ಬಡಿದೆಬಿಸುತಿತ್ತು . ಇವರುಗಳ ಕರ್ಮಯೋಗಕ್ಕೆ ಹತ್ತು - ಇಪ್ಪತು ವರ್ಷಗಳ ಅನುಭವ ಹೆದರಿ ಓಡುತಿತ್ತು . ಗೆಲುವಿನ ಮಂತ್ರ ಪಠನಕ್ಕೆ ಕರ್ಣಾನಂದವಾಗುತಿತ್ತು . ವ್ಯಕ್ತಿ ಒಬ್ಬ ಕ್ಷೇತ್ರ ವೊಂದರಲ್ಲಿ ೧೦-೨೦ ವರ್ಷಗಳಲ್ಲಿ ಮಾಡುವ ತಪ್ಪನು ಇವರು ದಿನಗಳ ಲೆಕ್ಕದಲ್ಲಿ ಮಾಡುತಿದ್ದರು . ಆ ಮೂಲಕ ಪಾಠ ಕಲಿತಿದ್ರು.
ಅನುಭವಿಗಳನ್ನ ಮೀರಿಸುವ ಅನುಭವ ಇವರಿಗೆ ದಕ್ಕಿತು . ಗೆಲುವಿನ ಗರಿ ಮುಕುಟಕ್ಕೆ ಏರಿತು . ಅದರಿಂದ ನನ್ನ ವಾದವಿಷ್ಟೇ , ಸಾಮರ್ಥ್ಯ ವನ್ನು ಅನುಭವ ಮಾತು ವಯಸ್ಸಿನ ಆಧಾರದ ಮೇಲೆ ಅಳೆಯಬೇಡಿ . ಮೊದಲು ಅನುಭವ ಪಡೆಯಲು ಬಿಡಿ . ಜೊತೆಗೆ ಹುರಿದುಂಬಿಸಿ ........ IN YOU CANNOT ಸುಮ್ಮನಿರಿ .... ಆದ್ರೆ ಎಚ್ಚರ ..... ಪ್ರತಿಭೆಯನ್ನು ಸುಡುತೇನೆ ಎಂಬುದು ಮೂರ್ಖತನದ ಪರಮಾವಧಿ ........
ಶರತ್ .....

Sunday, October 26, 2008

ಆಕಸ್ಮಿಕವಾಗಿ ಎದುರಾದ ಮಾನವೀಯ............


ಅದು ಪ್ರತಿದಿನದ ಬದುಕು. ಎಲ್ಲಿಂದಲೋ ಬಂದವರು ನಾವುಗಳು ಒಂದು ನೆಲೆ ಅಂತಾ ನಿಂತಿದ್ದೇವೆ. ನಮ್ಮ ಮನೆ ಒಂದು ಮೂಲೆ, ಕಾರ್ಯ ನಿರ್ವಹಿಸೋದು ಇನ್ನೆಲ್ಲೋ. ಹೀಗೆ , ದಿನದ ಜಂಟಾಟದ ನಡುವೆ ಬಸ್ಸೇರಿ ಕಛೇರಿಯೆಡೆಗೆ ಮುಖ ಮಾಡಿದ್ದೆ. ನಿಜವಾಗೂ ಅವತ್ತು ರಸ್ತೆ ಖಾಲಿ ಖಾಲಿ. ನೋಡು ನೋಡುತಿದ್ದಂತೆ ಬಸ್ಸು ತನ್ನ ವೇಗ ಪಡೆದುಕೊಂಡಿತ್ತು. ಭಾನುವಾರ. ಮುಂದಿದ್ದ ದೀಪಗಳ ಹಬ್ಬಕ್ಕೆ ಒಂಥರಾ ನೀರವ ಮೌನ.

ಓಡುತಿದ್ದ ಬಸ್ಸು ಕ್ರಮೇಣ ಬುಸುಗುಡುತಿತ್ತು. ಕಣ್ಣು ಹಾಗೇ ಹದವಾದ ನಿದ್ದೆಗೆ ಜಾರುತಿತ್ತು. ಪಕ್ಕದಲ್ಲಿದಿದ್ದ ಗೆಳಯ ರಫಿ ಎಫ್ ಎಂ ನ ಹಾಡಿಗೆ ತಲೆದೂಗುತಿದ್ದ. ಒಂದರ ನಂತರ ಒಂದರಂತೆ ಎದುರಾದ ನಿಲ್ದಾಣ ದಾಟಿ ಬಸ್ಸು ತಿರುವಿನಲ್ಲಿ ಹೊರಳಿದ್ದೇ ತಡ, ಬಸ್ಸು ಧಿಡೀರನೇ ಬ್ರೇಕ್ ಹಾಕಿತು. ನಿದ್ರಾ ದೇವತೆ ಆವರಿಸಿದ್ದ ನನಗೆ ಎದುರಿದ್ದ ಚಿತ್ರಣ ಅಸ್ಪಷ್ಟವಾಗಿತ್ತು.

ನಿಜವಾಗೂ ಜೀವ ಇಷ್ಟು ಅಗ್ಗವಾ ಅನ್ನಿಸಿದ್ದು ಆವಾಗಲೇ. ಪಟಾಕಿ ತರುವುದಾಗಿ ಹೇಳಿ ಹೊರನಡೆದ ತಂದೆ. ಹಬ್ಬದೂಟಕ್ಕೆ ದಿನಸಿ ತರುವ ಭರವಸೆ ನೀಡಿದ ಗಂಡ, ಜವಾಬ್ದಾರಿಯುತ ಮಗ, ಅಷ್ಟೇ ಅಲ್ಲಾ ಅಣ್ಣ, ತಮ್ಮ ಹೀಗೆ ಎದುರಿದ್ದ ಮನುಷ್ಯನಿಗೆ ಅದೆಷ್ಟೋ ಜವಾಬ್ದಾರಿಯ ಪಾತ್ರಗಳು. ತಲೆಗೆ ತೂಗು ಹಾಕಿದ ಹೆಲ್ಮಟ್ ನೆಲಕ್ಕುರುಳಿದೆ. ಪಕ್ಕದಲ್ಲೇ ಕಡು ಗೆಂಪು ಬಣ್ಣದ ಸಿಂಚನ. ಕಾಲಿಗೆ ತೊಟ್ಟಿದ್ದ ಬಾಟಾ ಚಪ್ಪಲಿ ಮಾರು ದೂರಕ್ಕೆ ಸರಿದೆವೆ. ಕನ್ನಡಕ ತನ್ನ ಆಕಾರಕಳಿದುಕೊಂಡು ಅಂಗಾತ ಮಲಗಿದೆ.

ಎದುರಿಂದ ಬಂದ ಕಾರಿಗೆ ಆಯ ತಪ್ಪಿ ಬೈ ಸವಾರ ನೇರವಾಗಿ ಡಿಕ್ಕಿಹೊಡೆದಿದ್ದಾನೆ. ಅಷ್ಟೇ, ಪರಿಣಾಮ ರಸ್ತೆ ಡಿವೈಡರ್ ನೆತ್ತಿ ಸೀಳಿದೆ. ಇಲ್ಲೊಂದು ವಿಷಯ ಪ್ರಸ್ತಾಪಿಸಲೇಬೇಕು. ಈ ನಮ್ಮ ಬೆಂಗಳೂರಿನ ಆಟೋ ಡ್ರೈವರ್ ಗಳನ್ನ ಅದೆಷ್ಟೇ ಜನ ಬೈಕೋಬಹುದು. ಇಲ್ಲ ಕಣ್ರೀ ಅವರಿಗೂ ಮಾನವೀಯತೆ ಇದೆ. ಈ ಅಪಘಾತ ಪ್ರಕರಣದ ನಿಜವಾದ ಹೀರೋಗಳೇ ಆಟೋ ಚಾಲಕರು.

ನಿಯಂತ್ರಣ ತಪ್ಪೋ, ಮೈಮರೆತೋ ಅಥವಾ ಆಕಸ್ಮಿಕವಾಗೋ ನಡೆದ ಈ ಘಟನೆಯಲ್ಲಿ ಅದೆಲ್ಲಿದ್ರೋ, ಬಂದೋರೇ, ಪೂರ್ವಾಪರ ವಿಚಾರಿಸದೇ, ವ್ಯಕ್ತಿಯ ಬಗುಲಿಗೆ ಕೈಹಾಕಿದೋರೇ ಆಟೋ ಏರಿಸಿ ಆಸ್ಪತ್ರೆಗೆ ಹೊಡಿ. ಅಲ್ಲಿಗೆ ಒಂದು ಚಿತ್ರಣ ಅಂತ್ಯವಾಗುತ್ತೆ.

ನೋಡುತ್ತ ನಿಂತ ನಮ್ಮೆಲ್ಲರನ್ನ ಉದ್ದೇಶಿಸಿ ಆಟೋ ಚಾಲಕನೊಬ್ಬ ಒಂದೇ ಮಾತು. ನೋಡ್ತಾ ನಿಲ್ಲೋಕೆ ಇದು ಸಿನಿಮಾ ಅಲ್ಲಾ, ಸ್ವಲ್ಪ ಯಾಮಾರಿದ್ರೆ ಜೀವ ಗಡಿ ದಾಟುತ್ತೆ. ನಿಜಕ್ಕೂ ಸತ್ಯ ಕಣಯ್ಯಾ. ಯಾರಿಗೂ ರಕ್ತದ ಮಡುವು ದಾಟಿ ಆತನ ಕೈಹಿಡಿದು ನೆರವಾಗೋ ಮನಸು ಬರಲಿಲ್ಲ. ಆದ್ರೆ, ಆಟೋ ಅಂತಾ ಕರೆಯಿಸಿಕೊಳ್ಳೋ ಈ ಜನಗಳ ಸಾಮಾಜಿಕ ಕಳಕಳಿ ಹೆಮ್ಮೆತರುತಿತ್ತು.

ಬದುಕಿನ ಬಂಡಿ ಒಂದಿಷ್ಟು ಆಯ ತಪ್ಪದ್ರೆ. ಇಲ್ಲಿ ಯಾರೂ ಇಲ್ಲ ಅಂದುಕೊಂಡು ಮನೆ ಬಿಡುವ ಜನಗಳ ಪಾಲಿಗೆ ಆಟೋದವರು ಇದ್ದಾರೆ. ಒಂದಲ್ಲಾ ಎರಡಲ್ಲಾ ಹತ್ತಾರು ಆಟೋಗಳು ಜಮಾಯಿಸಿ ಆ ಅನಾಮಿಕನೊಬ್ಬನ ನೆರವಿಗೆ ಬಂದದ್ದು, ಅದ್ಭುತ.

ದಾರಿಯಲ್ಲಿ ರಕ್ತಕಾರಿ ಸಾವಿನ ಕದ ತಟ್ಟಿದ ವ್ಯಕ್ತಿ ಇದೀಗ ಅದ್ಯಾವುದೋ ಆಸ್ಪತ್ರೆಯ ಮಂಚದ ಮೇಲೆ ಹಾಗೇ ಒರಗಿರಬಹುದು. ಮನಸ್ಸಿನ ಕಂದಕದಿಂದ ಒಂದೇ ಮಾತು, ಬದುಕಿದೆನಲ್ಲಾ.....

ಇದಕ್ಕೆಲ್ಲಾ ಆಟೋ ಜನಗಳೇ ಕಾರಣ......

ಬರುತ್ತೇನೆ.....

ಮತ್ತೆ ನೆನಪಿನಂಗಳದಿಂದ

ಪ್ರತೀಕ್ ಕೊಟ್ರೇಶ್................

Wednesday, October 22, 2008

ಜೇನು ಜೇನಿನ ಹನಿಮಾತು.......

ಏಕೋ ಎಲ್ಲರೂ ಬೇಸರಗೊಂಡಿದ್ರು. ಮನಸು ಹೊಸದನ್ನು ಬಯಸುತಿತ್ತು. ಆಫೀಸಿನ ಮೊಗಸಾಲೆಯಲ್ಲಿ ಕಾಲ ಕಳೆದು ಕಳೆದು ಹಾಳಾದ್ದ್ ಏಸಿ ಉಸಿರು ಬಿಗಿಗೊಳಿಸಿ ಮೈ,ಕೈ ಎಲ್ಲವನ್ನೂ ಒಮ್ಮೆ ಮರಗಟ್ಟಿಸ್ತವೆ. ಇಂಥ ವಾತಾವರಣದಲ್ಲಿದ್ದೋ, ಅಥವಾ ನಮಗೆ ನಾವೆ ಕಡಿವಾಣ ಹಾಕಿಕೊಂಡೋ ಗೊತ್ತಿಲ್ಲ ಎಲ್ಲವೂ ಮರೆತಂತಾಗಿತ್ತು. ಇವತ್ತು ಒಮ್ಮೆಲೇ ನಮ್ಮ ಕಛೇರಿಯ ಕ್ಯಾಂಟೀನ್ ನಮ್ಮೆಲ್ಲರ ಮನದ ಮೊಗದಲ್ಲಿ ನಗುವಿನ ಗೆರೆ ಎಳೆದಿತ್ತು.
ಹಾಯಾಗ್ ಕುಳಿತು ಹರಟಿ, ಒಂದಿಷ್ಟು ಗೆಳೆಯರನ್ನು ಚೇಡಿಸಿ, ಕಿಚಾಯಿಸಿ ಎಲ್ಲರೂ ನಗುವಿನ ಕಡಲಲ್ಲಿ ಮಿಂದು ಎದ್ದೆವು. ಗುತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲರೂ ಒಂದು ಗೊತ್ತಾದ ಪರಿಧಿಯಲ್ಲಿ ಬಂಧಿಯಾಗಿದಿವೀ ಅನ್ನಿಸ್ತಿದೆ. ಪ್ರತಿ ದಿನ ಸುದ್ದಿ ಒಡಲಲ್ಲಿ ಜೀವಿಸಿ ನಮ್ಮ ವಯುಕ್ತಿಕ ಬದುಕಿನ ಒಂದಿಷ್ಟು ಚಹರೆಯೇ ಬದಲಾಗಿಬಿಟ್ಟಿದೆ.
ಅದು ಕಾಲೇಜು ದಿನಗಳು, ಇಳಿ ವಯಸ್ಸಿನ ಮುದುಕನೊಬ್ಬ ನಸುಕಿಗೆ ಎದ್ದು, ಹೊಟ್ಟೆ ತುಂಬಿಸಲು ಛಲ ತೊಟ್ಟವರಂತೆ ಓಡಿ ಬರ್ತಿದ್ದ. ನಮ್ಮಜ್ಜನ ಕಾಲದ ಸೈಕಲ್ ಏರಿ, ಅದರ ಪೆಡಲ್ ಮೇಲೆ ತನ್ನ ಜೀವ ಕಳೆದು ಕೊಂಡ ಕಾಲು ಹಾಕುತ್ತ ನಮಗಾಗಿ ಬರ್ತಿದ್ದ. ತುಂಬು ೭೦ ಜೀವವದು. ಮಕ್ಕಳು ಮೊಮ್ಮಕ್ಕಳು ಹೀಗೆ ಕಾಲದೂಡೋ ಕಾಲಘಟ್ಟದಲ್ಲಿ ಎಲ್ಲಿಂದಲೋ ಬಂದು ನಾಲ್ಕಕ್ಷರ ಕಲಿವ ನಮ್ಮಂಥವರ ಹಸಿವ ನೀಗಿಸುತಿದ್ದ.
ನಿಜ. ಕಣ್ಣಲ್ಲಿ ಕಣ್ಣಿಟ್ಟು ಆತನನ್ನು ಒಮ್ಮೆ ನೋಡಿದ್ರೆ, ಜೀವ ಮರುಗುತಿತ್ತು. ನಾವೆಲ್ಲಾ ಅಸಾಯಕರು. ಮನೆಯಿಂದ ತಿಂಗಳಂತ್ಯಕ್ಕೆ ಬರುತಿದ್ದ ಚೂರು ಪಾರು ಕಾಸನ್ನೇ ಗುಡ್ಡೆ ಹಾಕಿ ದಿನ ದೂಡುತಿದ್ದೋರು ನಾವು. ನೆರವಿನ ಹಸ್ತ ನೀಡಬೇಕೆಂದ್ರೂ ಅಲ್ಲಿ ಅದು ಅಸಾಧ್ಯವಾಗಿತ್ತು.
ಇದೀಗ, ಅನ್ನದಾತನ ಮುಖದಲ್ಲಿ ಸುಕ್ಕುಗಟ್ಟಿದ ಗೆರೆಗಳು ಕಣ್ಣಿಗೆ ರಾರಾಜಿಸುತ್ತಿವೆ. ದುಡ್ಡಿಗೇ ಮಾಡಿದ್ರೂ ಅದರಲ್ಲಿ ಗೊತ್ತಿಲ್ಲದಂಥ ಒಂದು ಅವ್ಯಕ್ತ ಪ್ರೀತಿ ಇತ್ತು. ಅದ್ಭುತ ಅಲ್ಲದಿದ್ರೂ ತಿಂದ ಅನ್ನ ದೇವರಾಣೆ ಹೊಟ್ಟೆಗೆ ಹತ್ತುತಿತ್ತು. ಅಜ್ಜನ ಕ್ಯಾಂಟೀನಿನ ಹೊರಾಂಗಣದಲ್ಲಿ ಹರಟುತ್ತಿದ್ದ ನಮಗೆ ಗಡಿಯಾರ ಯಾಕಾದ್ರೂ ಇದೆ ಅನ್ನಿಸ್ತಿತ್ತು.
ಅದೊಂದು ಅಪರೂಪದ ಪ್ರಪಂಚ. ಗೆಳೆಯರ ಬಳಗ ಕಟ್ಟಿ ದಾಳಿಗಿಳಿದ್ರೆ, ಅಜ್ಜನಂಗಡಿಯ ಗಿರುಮಿಟ್ಟು ಧ್ವಂಸವಾಗ್ತಿತ್ತು. ಕ್ಯಾಂಪಸ್ ಒಣ ರಾಜಕೀಯದಿಂದ ಹಿಡಿದು, ವಿವಿಯ ಕುಲಪತಿವರೆಗಿನ ನಮ್ಮ ಮಾತುಗಳು ಇಂದಿಗೂ ಮಧುರ ಸುಮಧುರ.
ಇದೀಗ ಬೆಂದಕಾಳೂರಿನ ಹೆಬ್ಬಾಗಿಲಲ್ಲಿ ನಿಂತು ದಿನಗಳನ್ನು ಒಮ್ಮೆ ಹಾಗೇ ಮೆಲುಕು ಹಾಕಿದ್ರೆ. ಇಲ್ಲಿ ನಮ್ಮ ತನಕ್ಕೆ ಬೆಲೆ ಇಲ್ಲ.ಪಕ್ಕದಲ್ಲೇ ಹಾದು ಹೋದ್ರೂ ನಮ್ಮವರ ಬೆವರ ಕಮಟಿಲ್ಲ. ಇಲ್ಲೆಲ್ಲಾ ಸುಗಂಧ ಹೀರೋರೆ.
ನಿಜವೋ ಸುಳ್ಳೋ, ಇಂದಿನ ಕ್ಯಾಂಟೀನ್ ಪುರಾಣ ನಮ್ಮ ದಿನಗಳನ್ನು ನೆನಪಿಸಿ ಒಂದೊಮ್ಮೆ ಕಣ್ಣಂಚಲ್ಲಿ ನೀರಜಿನಿಗಿಸಿದ್ರೆ ಅದು ತಪ್ಪಲ್ಲ. ನಾವು ನಮ್ಮ ಕಾಲೇಜು ಅದೆಂಥ ಸವಿನೆನಪು.
ಇಂತಿ ನಿಮ್ಮ ಪ್ರೀತಿಯ
ಹಾಗೇ ಸುಮ್ಮನೆ.....
ಪ್ರತೀಕ್ ಕೊಟ್ರೇಶ್...........

Friday, October 17, 2008

HEART BEAT DOES TWO THINGS IT GIVES LIFE AND ASKS US TO
COUNT THE DURATION OF DEATH- SHASAN......







Wednesday, October 15, 2008

ಕ್ಷಮಿಸೆಯಾ....?


ನಿಜ ಗೆಳತಿ....

ನನ್ನಿಂದ ತಪ್ಪಾಗಿದೆ

ನಾನು ಹಾಗೆ ನಡೆದುಕೊಳ್ಳಬಾರದಿತ್ತು

ಏನು ಮಾಡ್ಲಿ ನಿನ್ನ ಬಗ್ಗೆ ನಾನು ಅಷ್ಟೊಂದು ಪೊಸೆಸಿವ್ ಆಗಿದ್ದೇನೆ

ನಿನ್ನ ನಗುವನ್ನ, ಕಣ್ಣಿನ ನೋಟವನ್ನ ಅರ್ಥ ಮಾಡಿಕೊಳ್ಳುವಲ್ಲಿ ನಾನು ಎಡವಿದೆ...

ಪೊಸೆಸಿವ್ ಆದವನಿಂದ ಇದಲ್ಲದೇ ಬೇರೆ ಏನು ತಾನೆ ನಿರೀಕ್ಷಿಸಲು ಸಾಧ್ಯ...

ಅಲ್ವ ಅಮ್ಮು...?

ಅದಕ್ಕೆ ಕೇಳ್ತಿರೋದು
ಪ್ಲೀಸ್ ಕ್ಷಮಿಸೆಯಾ....?


ಬಿಟ್ಟುಬಿಡು


ಅದೆಷ್ಟು ಮತ್ಸರ ನಿನಗೆ....?!
ಬಾಚಿ ತಬ್ಬಲಿ ಬಿಡು
ಒಂದನೊಂದನು
ಬಿಟ್ಟುಬಿಡು ಹಿಡಿದಿರುವ
ಕಣ್ಣ ರೆಪ್ಪೆಗಳನು
- ಕರಣಂ






Tuesday, October 14, 2008

ಮನಸ್ಸುಗಳ ಮಾತು ಮಧುರ...........




ಮಿಡಿಯುವ ಹೃದಯಗಳ ಮನಸ್ಸುಗಳ ಮಾತು ನಿಜಕ್ಕೂ ಮಧುರ. ಆಗ ತಾನೆ ಪ್ರೇಮ ಪಾಶಕ್ಕೆ ಬಿದ್ದ ಪ್ರೇಮಿಗಳ ಮನಸ್ಸಿನ ಮಾತು ಸಿಹಿ-ಸಿಹಿ. ಕಣ್ಣೋಟದ ಮಿಂಚಲ್ಲೇ ಭಾವನೆಗಳನ್ನು ಹೇಳುವ ಕಲ್ಪನೆ
ದ್ಭುತ ಅಲ್ವಾ ಸ್ನೇಹದ ಮಾತಿಂದ ಪ್ರೀತಿಯ ಆನಂದ ಪಡೆಯೋ ಯುವ ಹೃದಯಗಳಿಗೆ ಮೌನಗಳ ಮಾತೆ ಬೆಸುಗೆ.



ಲವ್ವೇ ನಮ್ಮ ಬೈಬಲ್ಲು, ಅಂತ ಪುಸ್ತಕಗಳನ್ನು ದೂರಮಾಡಿ ಬಣ್ಣದ ಲೋಕದಲ್ಲಿ ವಿಹರಿಸುವ ಪ್ರೇಮಿಗಳಿಗೆ ಮೌನಗಳ ಮಾತೆ ಕೊಂಡಿ. ಪ್ರೀತಿಯ ನಶೆಯಲ್ಲಿ ಮುಳುಗಿ ಹೋದ ಪ್ರೇಮಿಗಳು ಪ್ರೀತಿಯನ್ನು ಬಿಚ್ಚಿ ಹೇಳಿಕೊಳ್ಳೋ ಗೋಜಿಗೆ ಹೋಗಲ್ಲ.



ಇದು ಎಲ್ಲಿವರೆಗೆ........



ತಮ್ಮಿಬ್ಬರ ಪ್ರಿತಿಯನ್ನ ಬಚ್ಚಿಟುಕೊಂಡೇ ಪ್ರೀತಿಯ ಗೂಡ ಕತ್ತಿಕೊಳ್ತಾ ಸಾಗ್ತಾರೆ. ನಿಜಕ್ಕೂ ಈ ಮನಸ್ಸುಗಳ ಮಾತೇ ಅಪಾಯಕಾರಿ. ಮೌನದಲ್ಲೇ ಪಾರ್ಕು, ಸಿನಿಮಾ ಮುಗಿಯುತ್ತೆ.



ಮೌನ ಮುರಿದಾಗ........


ಸಂಭಿವಿಸುವುದೇ ದೊಡ್ಡ ಅನಾಹುತ........



ಹುಡಗನೋ ಹುಡಗಿಯೋ ಒಂದೊಮ್ಮೆ ಮೌನ ಮುರಿದು ಪ್ರಿತಿಯನ್ನ ಬಿಚ್ಚಿಟ್ಟಾಇ ಯಡವಟ್ಟು..........



ಒಬ್ಬ ಒಳ್ಳೆ ಫ್ರೆಂಡ್ ಅಂತ ಅಸ್ಟೊಂದು ಫ್ರೀಯಾಗಿ ನಡ್ಕೊಂಡಿದ್ದೆ ತಪ್ಪಾ........ ನೀನು ನನ್ನ ತಪ್ಪಾಗಿ ಅರ್ಥೆಸಿಕೊಂಡೆ ಅನ್ನೋ ಮೂಲಕ ಮಧುರ ಸ್ನೇಹಕ್ಕೆ ಕೊಡಲಿ ಪೆಟ್ಟು. ಅಸಲಿಗೆ, ಅನೇಕ ಯುವಕರ ಯುವತಿಯರ ಮದ್ಯ ಜರಗುವುದೇ ಇಂತಹ ಅನಾಹುತ. ಅದಕ್ಕೆ ಮನಸ್ಸುಗಳ ಮಾತು ಮಧುರ. ಆದ್ರೆ, ಅತಿಯಾದರೆ ವಿಷ. ಅಲ್ವಾ, ಅದಕ್ಕೆ ಮೌನದ ಮಾತು ಕಮ್ಮಿಯಾಗಬೇಕು. ಮೌನ ಮುರಿದು ಲವ್ವನ್ನ ಹೇಳಿಕೊಂಡು ಬಿಡಿ. ಒಂದು ಮಧುರ ಸ್ನೇಹ ಮುರಿದುಕೊಳೋ ಮೊದಲು ಮೌನ ಮುರಿಯುವುದು ಒಳಿತು ಅಲ್ವಾ.......

ಮನಸ್ಸುಗಳ ಮಾತಿಗೆ ಒಪ್ಪಿಗೆಯ ಅಪ್ಪುಗೆ ಸಿಕ್ಕಾಗ ಮತ್ತದೇ ಮನಸ್ಸುಗಳ ಮಾತಲ್ಲಿ ಒಲವಿನ ಸಿಹಿ ಪಡೆಯಬಹುದಲ್ವೆ ?









ಬೀಜಿಂಗ್ ಒಲಂಪಿಕ್ಸ್ ನಯವಂಚನೆ

ಈಗೆನಿದ್ರು ಅಂದ ಚಂದ ಗಿಮಿಕ್ಸ್ ಕಾಲ . ಮೊದಲು ನೋಡಲು ಅಂದವಾಗಿರಬೇಕು ಪ್ರತಿಭೆಗೆನಿದ್ರು ಎರಡನೆಯ ಸ್ಥಾನ . ಹೌದು ಬೀಜಿಂಗ್ ಒಲಂಪಿಕ್ಸ್ ನಲ್ಲಿ ಎಲ್ಲರ ಗಮನ ಸೆಳೆದ ಈ ಪುಟ್ಟ ಪೋರಿ ರಾಷ್ಟ್ರ ಗೀತೆ ಯನ್ನ ಹಾಡಿ ಎಲ್ಲರ ಮನೆಮಾತಾಗಿದ್ದಳು . ಈಕೆ ಲೀನ್ ಮಿಯೋಕ್ . ಆದರೆ ಅಸಲಿಗೆ ಈ ಪುಟಾಣಿ ಹಾಡನ್ನೇ ಹಾಡ್ತಿರಲಿಲ್ಲ.ಕೇವಲ ಬಾಯಿ ಸನ್ನೆ ಮಾಡತಿದ್ಲು. ಅರೇ ಇದೇನು ಅಂತ ಹುಬ್ಬೇರಿಸಬೇಡಿ. ಬರೀ ಅಂದ ಚಂದ ಬಿಂಕ ಬಿನ್ನಾಣಕ್ಕಾಗಿ ಈಕೆಯನ್ನ ವೇದಿಕೆ ಮೇಲೆ ನಿಲ್ಲಿಸಲಾಗಿದೆ.

ಯಾಂಗ್ ಪೇಯಿ ಲೀನ್ ಮಿಯೋಕ್

ಎಲೆಮರೆಕಾಯಿ ತಪ್ಪುಯನದಲ್ಲ


ವೇದಿಕೆಯ ಹಿಂಭಾಗದಿಂದ ಮಧುರ ಕಂಠ ಹೊರಹೊಮ್ಮುತಿತ್ತು. ಇಲ್ಲೇ ಆಗಿದ್ದು ಅಸಲಿಗೆ ನಯವಂಚನೆ. ಹಿಂದಿನಿಂದ ಹೊರಹೊಮ್ಮುತ್ತಿದ್ದ ಕೋಗಿಲೆ ಧ್ವನಿ ಯಾಂಗ್ ಪೇಯಿ ಎಂಬ ಏಳು ವರ್ಷದ ಪ್ರಚಂಡ ಪುಟಾಣಿಯದ್ದು. ಯಾಂಗ್ ಪೇಯಿ ನೋಡಲು ಅಂದವಾಗಿರಲಿಲ್ಲ, ದಂತರಚನೆ ಸರಿಯಾಗಿಲ್ಲ ಎಂಬ ಕಾರಣದಿಂದ ನೈಜ ಪ್ರತಿಭೆಯನ್ನು ತೆರೆಯ ಹಿಂದೆ ಬಚ್ಚಿಡಲಾಗಿತ್ತು. ಇದು ನಾವು ಹೇಳುತ್ತಿರುವ ಮಾತಲ್ಲ. ಸ್ವತಹ ಸಂಘಟಕರೇ ನೀಡಿದ ಸಮಜಾಯಿಸಿ. ಒಂದೇ ಮಾತಲ್ಲಿ ಹೇಳೋದಾದ್ರೆ, ವಿಶ್ವದ ಮುಂದೆ ನಿಜ ಪ್ರತಿಭೆ ಎಲೆ ಮರೆ ಕಾಯಿಯಾಯ್ತು. ಇದು ಮಗುವೊಂದರ ಕಥೆ ಮಾತ್ರವಲ್ಲ. ಅನೇಕರು ತೆರೆ ಮರೆಯ ಹಿರೋಗಳಾಗಿಯೇ ಉಳಿದುಬಿಡ್ತಾರೆ. ಆದ್ರೆ ನಾನೇ ಬರೆದೆ ನಾನೇ ಹಾಡಿದೆ ಎಂಬ ಆತ್ಮ ತೃಪ್ತಿ ಅವರಲ್ಲಿ ಶಾಶ್ವತವಾಗಿರುತ್ತದೆ.

Monday, October 13, 2008

ಮುಸ್ಸಂಜೆ ಮುನಿಸು
ಮಾತಾಗಿ ಬಂದು
ಮನಸುಗಳ ನಡುವೆ ಮುನಿಸಾಯ್ತು
ನಿಗಿ ನಿಗಿ ಸೂರ್ಯ
ಮೂಡಣಕ್ಕೆ ಸರಿದು
ಉಸಿರಾಟದ ಒಲವಿಗೆ ಇರುಳು ಕವಿದೋಯ್ತು
ನನ್ನ ಮಹಾ ಮನಸ
ನೀ ಮುಸುಕು ಹಾಕಿ
ಮಸಕು ಕನ್ನಡಿಯ ಹಿಡಿದು ನೋಡಿದೆ
ನಾ ಮಾಡದ ತಪ್ಪ ಹುಡುಕಿದೆ
ಆದರು ನನ್ನ ಮನಸ ನೀ ಬಿಡದೆ ಕಾಡಿದೆ
ಮೆಲುಮಾತು..............
ಪ್ರಿಯ ಅಕ್ಷರಭಿಮಾನಿಗಳೇ ಹವ್ಯಾಸಕ್ಕೆಂದು ಬರೆಯಲು ಕುಳಿತವರು ನಾವಲ್ಲ . ಈ ನಿಮ್ಮ ಬ್ಲಾಗ್ ಪ್ರಪಂಚದಲ್ಲಿ ಈಗಷ್ಟೇ ಅಂಬೆಗಾಲಿಡಲು ನಿರ್ಧರಿಸಿ ಬಂದವರು. ನಮಗೆ ಗೊತ್ತಿದ್ದನ್ನ , ಅನಿಸಿದ್ದನ್ನ, ಅನುಭವಿಸಿದ್ದನ್ನ, ಅಚ್ಚರಿ ಮೂಡಿಸಬಲ್ಲ ಕೆಲ ಸಂಗತಿಗಳನ್ನ ಹಂಚಿಕೊಳ್ಳಲು ನಿರ್ಧರಿಸಿ ಇದೀಗ ಬರೆಯಲು ಕುಳಿತಿದ್ದೇವೆ. ಹುಂಬು ಮನಸ್ಸಿನ ಕೆಲವರು ಒಂದೆಡೆ ಸೇರಿ ಈ ಹನಿಗಳ ಲೀಲೆ ಹೇಳಹೊರಟಿದ್ದೇವೆ.
ಪ್ರತಿದಿನ ಸುದ್ದಿಮನೆಯಲ್ಲಿ ನಮ್ಮದು ಅಕ್ಷರಗಳೊಂದಿಗಿನ ಮಹಾ ಸಮರ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ನಾವು ಮಾಡಿದ ತಪ್ಪುಗಳು ನಮ್ಮನುಭವಕ್ಕೆಬಂದು ಮಿಂಚಿ ಮರೆಯದ ಸಂಗತಿಗಳನ್ನು ಹೇಳುವ ಸಣ್ಣದೊಂದು ಪ್ರಯತ್ನ ಈ ನಮ್ಮ ಹನಿಗಳಲೀಲೆ.
ಬರವಣಿಗೆ ಮಾತ್ರ ಗೊತ್ತಿರುವ ಮತ್ತಿನೇನು ತಿಳಿಯದ ಪ್ರಪಂಚದಲ್ಲಿ ಬದುಕಿ ಒಂದಿಷ್ಟು ತಿಳಿದಿದ್ದೇವೆ. ಬರೆಯಬೇಕೆಂಬ ಬಯಕೆ ಇದ್ರೂ, ಕೆಲವೊಮ್ಮೆ ಅದು ಸಾಧ್ಯವಾಗಿಲ್ಲ. ನಮ್ಮಲ್ಲೇ ಅವ್ಯಕ್ತವಾಗಿ ಕುಳಿತಿರುವ ಒಂದಿಷ್ಟು ಪದಗಳನ್ನು ಹೆಣೆದು, ನಿಮಗೊಂದು ಅದ್ಭುತವೆನ್ನುವ ಕೃತಿ ನೀಡುವ ತಯಾರಿ ನಡೆದಿದೆ. ಇನ್ನೇನಿದ್ರೂ ನಾವು-ನೀವು ಮತ್ತು ನೀವು ಮಾತ್ರ. ಓದಿ ಅನುಭವಿಸಿ, ತಮಾಷೆಯಾಗಿದ್ರೆ ಸಣ್ಣದೊಂದು ನಗುಬೀರಿ, ಕಣ್ಣು ಕೆಂಪಾದರೆ ಅಷ್ಟೇ ತೀಕ್ಷ್ಣವಾಗಿ ತಿರುಗಿಬೀಳಿ. ಒಂದೊಮ್ಮೆ ನಿಮ್ಮೆದೆಯ ಸಾಹಿತ್ಯಕ್ಕೆ ಸಂಗೀತವಾದ್ರೆ ಹಾಗೆ ಸುಮ್ಮನೆ ಆ ದಿನಗಳ ನೆನೆಯಿರಿ. ತಿದ್ದಿ, ತೀಡಿ ಹೊಸ ಭಾಷೆ ಬರೆಯಲು ಕೈಜೋಡಿಸಿ.
ಹನಿಗಳಲೀಲೆ..................
ಹೆಸರೇ ಹೇಳುವಂತೆ ಸುಪ್ತ ಮನಸ್ಸಿನಲ್ಲಿ ಅಡಗಿರುವ ನಮ್ಮೆದೆಯ ಹಾಡನ್ನು ಹಾಡಿಬಿಡುವ ಹಂಬಲ. ಭೂಮಿಗಿಳಿಯುವ ಸಾವಿರಾರು ಹನಿಗಳಲ್ಲಿ ಕೆಲವಕ್ಕೆ ಮಾತ್ರ ಮುತ್ತಾಗುವ ಭಾಗ್ಯ. ಹಾಗೇ ಹನಿಗಳ ಲೀಲೆಯಲ್ಲಿ ಮೂಡಿಬರುವ ಅಕ್ಷರಗಳ ಚಿತ್ತಾರ. ಕನ್ನಡಿಗರ ಮನದಂಗಳದಲ್ಲಿ ಮುತ್ತಾಗುವ ಅವಕಾಶವನ್ನ ಅರಸಿ ನಿಂತಿದ್ದೇವೆ.
ಪದೇ ಪದೇ ಯೋಚಿಸಿದ್ರೂ ಕಣ್ಣೆದುರಲ್ಲಿ ಮತ್ತದೇ ನೀರಹನಿ. ಒಮ್ಮೆ ಉಸಿರು ಬಿಗಿ ಹಿಡಿದು ಹಿಂತಿರುಗಿ ನೋಡಿದ್ರೆ ಕತ್ತಲ ಕಾರ್ಮೋಡ. ಇಂತಹ ಕತ್ತಲಲ್ಲೂ ಬೆಳದಿಂಗಳ ಹುಡುಕುತಿದೆ ಹನಿಗಳ ಬಳಗ. ಇಂದಿನಿಂದ ಅಕ್ಷರ ಬಾಂದವರ ಶಾಲಾ ದಿನಗಳನ್ನು ಒಮ್ಮೆ ಕದಡುವ ಸಾಹಸ ಮಾಡಿದ್ದೇವೆ. ಬನ್ನಿ, ಮಳೆಹನಿಗಳಲ್ಲಿ ತೊಯ್ದು ಮಿಂದೆದ್ದು ಬರೋಣ....................
ಈಗಸ್ಟೇ ಆರಂಭ,
ವಿಶ್ವಾಸವಿರಲಿ,
ಹನಿಗಳಬಳಗ.