Tuesday, October 28, 2008

ಅನುಭವದ ಅನುಭಾವ ........

ಅನುಭವ ಈ ಪರಿಕಲ್ಪನೆಯೇ ಜಟಿಲ . ಆದ್ರೆ ಯಾವುದೇ ಕೆಲಸಕ್ಕೆ ಹೋದ್ರು ಮೊದಲು ಕೇಳೋ ಪ್ರಶ್ನೆ ನಿಮಗೆ ಎಷ್ಟು ಅನುಭವ. ಕೆಲಸ ಕೊಡೋಕೆ ಇವರು ರೆಡಿ ಇರೋಲ . ಅಂದ್ರೆ ಬಹುತೇಕ ಕಂಪನಿಗಳ ಪ್ರಕಾರ ಅನುಭವ ಅನ್ನೋದು ನಿಮ್ಮ ಹೆಸರಿನ ಮುಂದೆ ಪೋಣಿಸಿಕೊಳ್ಳೋ ಸರ್ಟಿಫಿಕೇಟ್ ......... ನೋಡು ನನಗೆ madhyama ಕ್ಷೇತ್ರದಲ್ಲಿ ೨೦ ವರ್ಷ ಅನುಭವ ಇದೆ . ಹೇ ತಗೀ ನಾನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜೀವಮಾನ ಪೂರೈಸಿದ್ದೇನೆ . ಹೀಗೆಂದು ಬಡಾಯಿಕೊಚಿ ಕೊಳ್ಳೋ ಅನೇಕ ಸ್ವಯಮ್ ಘೋಷಿತ ಬುದ್ಧಿವಂತರನ್ನ ನಾವು ನೋಡಿದ್ದೇವೆ . ಈ ವರ್ಗದ ಪ್ರಕಾರ ವರ್ಷಗಳ ಗುಣಕಾರವೇ ಕೆಲಸದ ನೈಪುಣ್ಯತೆ ಅಳೆಯುವ ಮಾನದಂಡ . ಈ ವಾದಕ್ಕೆ ನನ್ನ ತೀವ್ರ ಆಕ್ಷೇಪವಿದೆ . ನೀವು ಸಮಾನಮನಸ್ಕರಾಗಿ ನನ್ನ ವಾದವನ್ನು ಒಪ್ಪುವಿರಿ ಎಂದುಕೊಂಡು ಈ ಪದಗಳ್ಳನು ಜೋಡಿಸುವ ಯತ್ನಕ್ಕೆ ಮುಂದಾಗಿದ್ದೇನೆ . ಆದ್ರೆ ಒಪ್ಪಿಕೊಳೋದು ನಿಮ್ಮ ಅಂತಃಕರಣಕ್ಕೆ ಬಿಟ್ಟ ವಿಷಯ .
ಅಭಿನವ್ ಬಿಂದ್ರಾ ೨೪ ನೇ ವಯಸಿನಲ್ಲೇ ಒಲಿಂಪಿಕ್ಸ್ ನಲ್ಲಿ ಭಾರತ ಮಾತೆಯ ಕೊರಳಿಗೆ ಸ್ವರ್ಣ ಧರಿಸಿದ ಹೆಮ್ಮೆಯ ಪುತ್ರ .....
ಯುನೋನ ಬುಕಾಸೋವ್ ೫ ನೇ ವಯಸಿನಲ್ಲೇ ೧೪ ಸಾವಿರ ಅಡಿ ಎತ್ತರದ ಶಿಖರ ಏರಿದ ಧೀರೆ .... ಮಾಸ್ಟರ್ ಕಿಶನ್ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ......ದರ್ಶೀಲ್ ಸಫಾರಿ ಪ್ರಥಮ ಚಿತ್ರ ತಾರೆ ಜಮೀನ್ ಪರ ಚಿತ್ರದಲ್ಲೆ ಎಲ್ಲರ ಮನಗೆದ್ದ ತುಂಟ .
ಇವರೆಲ್ಲರ ಹೆಸರುಗಳ್ಳನ್ನ ಯಾಕೆ ಹೇಳ್ತಾಇದೀನಿ ಅಂತ ಆಶ್ಚರ್ಯವಾಗಬಹುದು . ಇವರೆಲ್ಲರ ಗುರುತುಗಳು ಇಲ್ಲಿ ಪ್ರಸ್ತುತ .
ಯಾಕಂದ್ರೆ ಇವರಾರು ಅವರವರ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಇದ್ದವರಲ್ಲ . ಆದ್ರೆ ಅಂದುಕೊಂಡದನ್ನ ಸಾಧಿಸಿಯೇ ತಿರಬೇಕೆಂಬ ಮಹದುದ್ದೇಶ ಈವರಲ್ಲಿ ಮನೆಮಾಡಿತ್ತು . ಕೂತರು ನಿಂತರು ಗೆಲ್ಲಲೆಬೇಕಂಬ ಮಂತ್ರ ಅವರನ್ನ ಮಂತ್ರಮುಗ್ಧಗೊಳಿಸುತಿತ್ತು .ಒಂದೊಮ್ಮೆ ನಿದ್ರೆಗೆ ಜರಿದರೂ ಕನಸು ಕನವರಿಕೆ ಬಡಿದೆಬಿಸುತಿತ್ತು . ಇವರುಗಳ ಕರ್ಮಯೋಗಕ್ಕೆ ಹತ್ತು - ಇಪ್ಪತು ವರ್ಷಗಳ ಅನುಭವ ಹೆದರಿ ಓಡುತಿತ್ತು . ಗೆಲುವಿನ ಮಂತ್ರ ಪಠನಕ್ಕೆ ಕರ್ಣಾನಂದವಾಗುತಿತ್ತು . ವ್ಯಕ್ತಿ ಒಬ್ಬ ಕ್ಷೇತ್ರ ವೊಂದರಲ್ಲಿ ೧೦-೨೦ ವರ್ಷಗಳಲ್ಲಿ ಮಾಡುವ ತಪ್ಪನು ಇವರು ದಿನಗಳ ಲೆಕ್ಕದಲ್ಲಿ ಮಾಡುತಿದ್ದರು . ಆ ಮೂಲಕ ಪಾಠ ಕಲಿತಿದ್ರು.
ಅನುಭವಿಗಳನ್ನ ಮೀರಿಸುವ ಅನುಭವ ಇವರಿಗೆ ದಕ್ಕಿತು . ಗೆಲುವಿನ ಗರಿ ಮುಕುಟಕ್ಕೆ ಏರಿತು . ಅದರಿಂದ ನನ್ನ ವಾದವಿಷ್ಟೇ , ಸಾಮರ್ಥ್ಯ ವನ್ನು ಅನುಭವ ಮಾತು ವಯಸ್ಸಿನ ಆಧಾರದ ಮೇಲೆ ಅಳೆಯಬೇಡಿ . ಮೊದಲು ಅನುಭವ ಪಡೆಯಲು ಬಿಡಿ . ಜೊತೆಗೆ ಹುರಿದುಂಬಿಸಿ ........ IN YOU CANNOT ಸುಮ್ಮನಿರಿ .... ಆದ್ರೆ ಎಚ್ಚರ ..... ಪ್ರತಿಭೆಯನ್ನು ಸುಡುತೇನೆ ಎಂಬುದು ಮೂರ್ಖತನದ ಪರಮಾವಧಿ ........
ಶರತ್ .....

No comments: